ಮೋದಿ ಚೌಕಿದಾರ್ ಅಲ್ಲ, ಶೋಕಿದಾರ: ಎಚ್.ಆಂಜನೇಯ

Update: 2019-04-19 15:55 GMT

ಬೆಂಗಳೂರು, ಎ.19: ಮೈ ಚೌಕಿದಾರ್ ಹೂಂ ಎಂದು ನರೇಂದ್ರ ಮೋದಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ಅವರು ಚೌಕಿದಾರ್ ಅಲ್ಲ ಶೋಕಿದಾರ್ ಎಂದು ಹೇಳಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಶುಕ್ರವಾರ ಹಾವೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡದೇಶವನ್ನು ಆಳುವ ಶ್ರೀಮಂತ ಪ್ರಧಾನಿ ಮೋದಿ, ಬೆಲೆಬಾಳುವ ಕೋಟು, ಮೇಕಪ್ ಮಾಡಿಕೊಂಡು ಭಾಷಣ ಮಾಡುತ್ತಾರೆ. ಇವರೆಲ್ಲಾ ವೋಟಿಗಾಗಿ ಏನೇನೊ ಸುಳ್ಳು ಹೇಳುತ್ತಾ ಇದ್ದಾರೆ. ಈಗಾಗಲೆ ಮತದಾರರು ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿಯನ್ನು ಸೋಲಿಸಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಡಿ.ಆರ್.ಪಾಟೀಲ್ ಅವರನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಈ ಬಾರಿ ಜೆಡಿಎಸ್‌ಗೆ ರಾಜ್ಯ ಭಾರ ಕೊಟ್ಟಿದ್ದೀವಿ. ಮತ್ತೆ ಚುನಾವಣೆಗೆ ಹೋದರೆ ಸಿದ್ದರಾಮಯ್ಯನವರೇ ಸಿಎಂ ಆಗುತ್ತಾರೆ. ಅಲ್ಲದೆ, ಸಿದ್ದರಾಮಯ್ಯ ಅವರೇ ನಮ್ಮ ಧೀಮಂತ ನಾಯಕರು. ಅವರೇ ಮುಂದಿನ ಸಿಎಂ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News