ಬಾಲಕಿಯ ಅಪಹರಣ ಪ್ರಕರಣ: ಇಬ್ಬರ ಬಂಧನ

Update: 2019-04-19 16:47 GMT

ಬೆಂಗಳೂರು, ಎ.19: ಮೂರು ವರ್ಷದ ಬಾಲಕಿಯನ್ನು ಅಪಹರಣ ಮಾಡಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಸಂಪಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿ, ಬಾಲಕಿಯನ್ನು ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರತ್‌ಹಳ್ಳಿಯ ಮಂಜುನಾಥನಗರದ ಮಂಜುನಾಥ(29) ಹಾಗೂ ಗುಂಜೂರುಪಾಳ್ಯ ಗ್ರಾಮದ ಎಚ್.ರಮೇಶ್(33) ಬಂಧಿತ ಆರೋಪಿಗಳಾಗಿದ್ದು, ಮಮತಾ(3) ಅಪಹರಣಕ್ಕೊಳಗಾದ ಬಾಲಕಿ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?: ಮಮತಾ ಎಂಬಾಕೆಯನ್ನು ಎ.10 ರಂದು ಮಧ್ಯಾಹ್ನ 1ಗಂಟೆ ವೇಳೆಗೆ 2 ರೂ.ಕೊಟ್ಟು ತಿಂಡಿ ತರಲು ಅಂಗಡಿಗೆ ಕಳಿಸಿದಾಗ ಹಣ ತೆಗೆದುಕೊಂಡು ಹೋದ ಬಾಲಕಿ ಮನೆಗೆ ವಾಪಸ್ಸು ಆಗಿರಲಿಲ್ಲ. ಈ ಸಂಬಂಧ ಪೋಷಕರು ಸಂಪಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಿ ಮಮತಾಳನ್ನು ಮನೆ ಹತ್ತಿರ ಅಪಹರಿಸಿರುವುದಾಗಿ ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಿ, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News