ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಲಿವೆ: ಬೆಂ.ಕೇಂದ್ರ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್

Update: 2019-05-20 14:28 GMT

ಬೆಂಗಳೂರು, ಮೇ 20: ‘ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಕೇವಲ ಸುಳ್ಳಿನ ಕಂತೆ, ಕೆಲವು ದಿನಗಳವರೆಗೆ ಅವರು ಕನಸು ಕಾಣಲಿ, ನಾಗರಿಕರು ಈ ಸಮೀಕ್ಷೆಗಳನ್ನು ಸುಳ್ಳಾಗಿಸಲಿದ್ದಾರೆಂಬ ನಂಬಿಕೆ ನನಗಿದೆ’ ಎಂದು ನಟ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ನುಡಿದಿದ್ದಾರೆ.

‘ಚುನಾವಣೋತ್ತರ ಸಮೀಕ್ಷೆಗಳ ಪೈಕಿ ಬಹುತೇಕ ಎಲ್ಲ ಸಮೀಕ್ಷೆಗಳೂ ದೇಶದಲ್ಲಿ ಮತ್ತೊಮ್ಮೆ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಈ ಸಮೀಕ್ಷೆಗಳು ಸುಳ್ಳಾಗಲಿದೆ ಎಂದಿದ್ದಾರೆ. ಅವರು ಕೆಲವಷ್ಟು ದಿನ ಕನಸು ಕಾಣಲಿ, ಆದರೆ ಆ ಸ್ವಪ್ನ ದೀರ್ಘವಾಗೇನೂ ಉಳಿಯುವುದಿಲ್ಲ. ನಂತರ ಅವರ ಪಾಲಿಗೆ ದುಃಸ್ವಪ್ನ ಮರುಕಳಿಸುತ್ತದೆ’ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.

ಮೇ 23ರಂದು ಸಾರ್ವಜನಿಕರು ಈ ಸಮೀಕ್ಷೆಗಳನ್ನು ಸುಳ್ಳಾಗಿಸುತ್ತಾರೆಂಬ ನಂಬಿಕೆ ನನಗಿದೆ. ಅಲ್ಲಿಯ ತನಕ ಬಾಪೂಜಿ ನಮಗೆ ಕಲಿಸಿದಂತೆ ಹಾಡುತ್ತಾ ಸಂಭ್ರಮಿಸಿ’ ಎಂದು ಪ್ರಕಾಶ್ ರಾಜ್ ಟ್ವಿಟ್ಟರ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News