ಒಬ್ಬ ಮಗನಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ: ನಟ ದರ್ಶನ್

Update: 2019-05-23 19:23 GMT

ಬೆಂಗಳೂರು, ಮೇ 23: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಗೆಲುವು ನನಗೆ ಅತೀವ ಸಂತಸ ತಂದಿದೆ. ಒಬ್ಬ ಮಗನಾಗಿ ನನ್ನ ಕರ್ತವ್ಯ ಮಾಡಿದ್ದೇನಷ್ಟೆ ಎಂದು ನಟ ದರ್ಶನ್ ಹೇಳಿದ್ದಾರೆ.

ಪಾಂಡಿಚೇರಿಯಲ್ಲಿ ಸಿನೆಮಾ ಚಿತ್ರೀಕರಣದಲ್ಲಿ ತೊಡಗಿರುವ ಅವರು, ಮಂಡ್ಯದಲ್ಲಿ ಸುಮಲತಾ ಗೆಲುವಿನ ಸುದ್ದಿ ಕೇಳಿ ಸಂತಸ ವ್ಯಕ್ತಪಡಿಸಿದ್ದು, ಈ ಗೆಲುವಿಗೆ ಕಾರಣಕರ್ತರಾದ ಮಂಡ್ಯದ ಜನತೆಗೆ ಧನ್ಯವಾದಗಳು. ಸಾವಿರಾರು ಮಂದಿ ಹಗಲಿರುಳು ಶ್ರಮಿಸಿದ ಫಲವಾಗಿ ಜಯವಾಗಿದೆ ಎಂದರು.

ಚುನಾವಣಾ ಪ್ರಚಾರದ ವೇಳೆ ಸುಮಲತಾ ಪರವಾಗಿ ಒಬ್ಬ ಮಗನಾಗಿ ಮಾಡಬೇಕಾದ ಎಲ್ಲ ಕೆಲಸವನ್ನು ಮಾಡಿದ್ದೇನೆ. ಈಗ ಅವರಿಗೆ ಗೆಲುವಾಗಿದ್ದು, ಅವರ ಸಂಭ್ರಮದಲ್ಲಿ ನಾನು ಭಾಗವಹಿಸುವುದಿಲ್ಲ. ಒಂದು ವೇಳೆ ಸೋತಿದ್ದರೆ ಅವರ ಕಷ್ಟದಲ್ಲಿ ಭಾಗಿಯಾಗುತ್ತಿದ್ದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News