ಬೆಂಗಳೂರು: ದೇವಸ್ಥಾನದ ಹುಂಡಿಯ ಬೀಗ ಮುರಿದು ಕಳವು
Update: 2019-06-08 18:26 GMT
ಬೆಂಗಳೂರು, ಜೂ.8: ನಗರದ ಮಹಾಲಕ್ಷ್ಮೀ ಲೇಔಟ್ನ ಕಾರ್ಯಸಿದ್ದಿ ಗಣಪತಿ ದೇವಸ್ಥಾನದ ಹುಂಡಿಯ ಬೀಗ ಮುರಿದು ನಗದು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಬೆಳಗ್ಗೆ ದೇವಾಲಯದ ಮುಖ್ಯಸ್ಥರು ಪ್ರವೇಶ ದ್ವಾರ ತೆರೆದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಸುಮಾರು ಒಂದು ವರ್ಷ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದ ಹಣ ಹುಂಡಿಯಲ್ಲಿತ್ತು. ಅಲ್ಲದೇ, ದೇವಸ್ಥಾನ ಆಡಳಿತ ಮಂಡಳಿಯು ಮುಂದಿನ ವಾರದಲ್ಲಿ ಹುಂಡಿ ತೆಗೆಯುವ ನಿರ್ಣಯ ಮಾಡಿದ್ದರು. ಹುಂಡಿ ತೆರೆಯುವುದನ್ನು ತಿಳಿದುಕೊಂಡಿರುವ ದುಷ್ಕರ್ಮಿಗಳು, ಶುಕ್ರವಾರ ರಾತ್ರಿ ಹುಂಡಿ ಬೀಗ ಒಡೆದು ನಗದು ದೋಚಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.