ಕ್ರೇನ್ ಹರಿದು ಪೇಂಟರ್ ಮೃತ್ಯು

Update: 2019-06-15 15:17 GMT

ಬೆಂಗಳೂರು, ಜೂ.15: ರಸ್ತೆ ದಾಟುವ ಸಂದರ್ಭದಲ್ಲಿ ಕ್ರೇನ್ ಹರಿದು ಪೇಂಟರ್ ಕೆ.ಎಂ.ಮಹೇಂದ್ರ(29) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಎಚ್‌ಎಂಜಿ ಸ್ಟೋನ್ ಗ್ರಾನೈಟ್ ಕಾರ್ಖಾನೆ ಬಳಿ ನಡೆದಿದೆ.

ಮೃತಪಟ್ಟಿರುವ ವ್ಯಕ್ತಿಯು ಚಾಮರಾಜನಗರದ ಕೆಂಪಾಪುರ ಮೂಲದವರು ಎಂದು ಹೇಳಲಾಗಿದ್ದು, ಪೇಂಟರ್ ಕೆಲಸ ಮಾಡುತ್ತಿದ್ದ ಅವರು ಕುಟುಂಬ ಸಮೇತರಾಗಿ ಇಲ್ಲಿನ ಯಡವನಹಳ್ಳಿಯಲ್ಲಿ ವಾಸ ಮಾಡುತ್ತಿದ್ದರು.

ಎಚ್‌ಎಂಜಿ ಸ್ಟೋನ್ ಗ್ರಾನೈಟ್ ಕಾರ್ಖಾನೆ ಬಳಿ ಮಹೇಂದ್ರ ರಸ್ತೆ ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ಅತ್ತಿಬೆಲೆ ಕಡೆಗೆ ಚಲಿಸುತ್ತಿದ್ದ ಕ್ರೇನ್‌ಗೆ ಆಯತಪ್ಪಿ ಸಿಕ್ಕಿದ್ದಾನೆ. ಚಾಲಕನಿಗೆ ಕ್ರೇನ್‌ನಲ್ಲಿ ಕುಳಿತಾಗ ಬಹುತೇಕ ಹತ್ತಿರವಿರುವ ಸ್ಥಳ ಕಾಣುವುದಿಲ್ಲ. ಈ ಕಾರಣದಿಂದಾಗಿ ಚಕ್ರಕ್ಕೆ ವ್ಯಕ್ತಿ ಸಿಲುಕಿರುವುದು ತಕ್ಷಣ ಗಮನಕ್ಕೆ ಬಂದಿಲ್ಲವೆಂದು ತಿಳಿದು ಬಂದಿದೆ. ಅಪಘಾತ ಗಮನಕ್ಕೆ ಬರುತ್ತಿದ್ದಂತೆ ಕ್ರೇನ್ ಬಿಟ್ಟು ಚಾಲಕ ಪರಾರಿಯಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲೀಸರು ಚಾಲಕನ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News