ಅತ್ಯಾಚಾರ ಸಂತ್ರಸ್ತ ಪುತ್ರಿಯ ‘ಶುದ್ಧೀಕರಣ’ಕ್ಕಾಗಿ ಔತಣಕೂಟ ನಡೆಸದ ಕುಟುಂಬಕ್ಕೆ ಬಹಿಷ್ಕಾರ!

Update: 2019-06-15 15:56 GMT

ಭೋಪಾಲ(ಮ.ಪ್ರ)ಜೂ.15: ತನ್ನ ಮಗಳ ‘ಶುದ್ಧೀಕರಣ’ಕ್ಕಾಗಿ ಸಮುದಾಯಕ್ಕೆ ಔತಣಕೂಟವನ್ನು ಏರ್ಪಡಿಸಲು ವಿಫಲಗೊಂಡಿದ್ದಕ್ಕಾಗಿ ಗ್ರಾಮ ಪಂಚಾಯತ್ ತನ್ನ ಕುಟುಂಬವನ್ನು ಬಹಿಷ್ಕರಿಸಿದೆ ಎಂದು ರಾಜಗಡ ಜಿಲ್ಲೆಯ 17ರ ಹರೆಯದ ಅತ್ಯಾಚಾರ ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.

ಮಾಂಸಾಹಾರದ ಔತಣಕೂಟವನ್ನು ಏರ್ಪಡಿಸುವವರೆಗೂ ಜಾತಿ ಬಹಿಷ್ಕಾರ ಮುಂದುವರಿಯಲಿದೆ ಎಂದೂ ಪಂಚಾಯತ್ ತಿಳಿಸಿದೆ ಎಂದು ಅವರು ಹೇಳಿದ್ದಾರೆ.

ಅತ್ಯಾಚಾರ ಘಟನೆಯು ಕಳೆದ ಜನವರಿಯಲ್ಲಿ ಬಾಲಕಿ ತನ್ನ ಮನೆಗೆ ಮರಳುತ್ತಿದ್ದಾಗ ನಡೆದಿತ್ತು ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.

ನಾವು ಗ್ರಾಮಸ್ಥರನ್ನು ಪ್ರಶ್ನಿಸಿದ್ದೇವೆ ಮತ್ತು ಬಹಿಷ್ಕಾರದ ಬಗ್ಗೆ ಯಾವುದೇ ಮಾಹಿತಿ ಗೊತ್ತಾಗಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದರು.

ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಪಂಚಾಯತ್‌ನ ಬಹಿಷ್ಕಾರದ ವಿರುದ್ಧ ರಾಜಗಡ ಜಿಲ್ಲಾ ಮಹಿಳಾ ಕಲ್ಯಾಣ ಸಮಿತಿಗೆ ದೂರು ಸಲ್ಲಿಸಿದ್ದಾರೆ ಎಂದು ಸಮಿತಿಯ ಸದಸ್ಯೆಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News