ಕಂದಕಕ್ಕೆ ಉರುಳಿದ ಬಸ್; ಆರು ಮಂದಿ ಮೃತ, 33 ಜನರಿಗೆ ಗಾಯ

Update: 2019-06-25 07:36 GMT
ಚಿತ್ರ ಕೃಪೆ: ಎಎನ್‌ಐ

ರಾಂಚಿ, ಜೂ.25: ಜಾರ್ಖಂಡ್‌ನ ಗರ್ಹ್ವಾದ ಅನ್ನಾರಾಜ್ ವ್ಯಾಲಿ ಬಳಿ ಮಂಗಳವಾರ ಬೆಳಗ್ಗಿನ ಜಾವ ಬಸ್‌ವೊಂದು ಕಂದಕಕ್ಕೆ ಉರುಳಿಬಿದ್ದ ಘಟನೆಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದು, ಇತರ 33 ಮಂದಿ ಗಾಯಗೊಂಡಿದ್ದಾರೆ.

12ಕ್ಕೂ ಅಧಿಕ ಪ್ರಯಾಣಿಕರು ಬಸ್‌ನೊಳಗೆ ಸಿಲುಕಿ ಹಾಕಿಕೊಂಡಿದ್ದಾರೆ. ಇವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಛತ್ತೀಸ್‌ಗಡದಿಂದ ಗರ್ಹ್ವಾದತ್ತ ತೆರಳುತ್ತಿದ್ದ ಬಸ್ ಬೆಳಗ್ಗೆ 2 ಗಂಟೆಯ ಸುಮಾರಿಗೆ ತಿರುವಿನಲ್ಲಿ ರಕ್ಷಣಾ ಗೋಡೆಯೊಂದಕ್ಕೆ ಢಿಕ್ಕಿ ಹೊಡೆದು ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ.

ಸ್ಥಳೀಯ ಗ್ರಾಮಸ್ಥರು ಮೊದಲಿಗೆ ಘಟನಾ ಸ್ಥಳಕ್ಕೆ ಧಾವಿಸಿದ್ದು, ಆ ಬಳಿಕ ಪೊಲೀಸರು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದರು.

ಗಾಯಾಳುಗಳು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

44 ಜನರನ್ನು ಬಲಿ ಪಡೆದಿದ್ದ ಕುಲ್ಲು ಬಸ್ ಘಟನೆ ನಡೆದ ಒಂದು ವಾರದೊಳಗೆ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News