ಮೈತ್ರಿ ಸರಕಾರಕ್ಕೆ ಆಘಾತ: ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದ ರಾಮಲಿಂಗಾ ರೆಡ್ಡಿ

Update: 2019-07-06 08:13 GMT

ಬೆಂಗಳೂರು, ಜು.6: ಮೈತ್ರಿ ಸರಕಾರದ ಪತನ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಇದೀಗ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿಯವರು ತಮ್ಮ ರಾಜೀನಾಮೆಯನ್ನು ಖಚಿತಪಡಿಸಿದ್ದಾರೆ.

ನಾನು ರಾಜೀನಾಮೆ ನೀಡುತ್ತಿದ್ದೇನೆ. ಮುಂದಿನ ನಡೆಯ ಬಗ್ಗೆ ನನಗಿನ್ನೂ ತಿಳಿದಿಲ್ಲ. ನನಗೆ ಕಾಂಗ್ರೆಸ್ ಬಗ್ಗೆ ಬೇಸರವಿಲ್ಲ. ಆದರೆ ಪಕ್ಷ ಬಿಟ್ಟು ಹೋಗುತ್ತಿರುವುದಕ್ಕೆ ಬೇಸರವಿದೆ ಎಂದರು.

ಪುತ್ರಿ ಸೌಮ್ಯಾ ಕೂಡ ರಾಜೀನಾಮೆ ನೀಡುತ್ತಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಅವರನ್ನೇ ಕೇಳಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News