Breaking News- ಖುದ್ದು ಭೇಟಿಯಾಗದೆ ರಾಜೀನಾಮೆ ಅಂಗೀಕರಿಸಲಾಗದು: ಸ್ಪೀಕರ್
Update: 2019-07-09 06:10 GMT
ಬೆಂಗಳೂರು, ಜು.9: ಖುದ್ದು ಭೇಟಿಯಾಗದ ಹೊರತು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲಾಗದು ಎಂದು ವಿಧಾನ ಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಮೈತ್ರಿ ಸರಕಾರ ಸದ್ಯದ ಅಪಾಯದಿಂದ ಪಾರಾಗಿದೆ.
ಕಾಂಗ್ರೆಸ್ ಪಕ್ಷದ 9 ಮತ್ತು ಜೆಡಿಎಸ್ ಪಕ್ಷದ 3 ಶಾಸಕರು ನೀಡಿರುವ ರಾಜೀನಾಮೆಯನ್ನು ಸ್ವತಃ ತನ್ನನ್ನು ಭೇಟಿಯಾಗದ ಹೊರತು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ತಿಳಿಸಿದ್ದಾರೆ.
ಶಾಸಕರು ತಮ್ಮ ರಾಜೀನಾಮೆಯ ಬಗ್ಗೆ ಯಾವುದೆ ಪೂರ್ವಾನುಮತಿ ಪಡೆದಿರಲಿಲ್ಲ. ನನ್ನ ಅನುಪಸ್ಥಿತಿಯಲ್ಲಿ ರಾಜೀನಾಮೆ ಸಲ್ಲಿಸಿರುವುದಕ್ಕೆ ನಾನು ಹೊಣೆಯಲ್ಲ. ನಿಯಮಾವಳಿಗಳ ಅನ್ವಯ ಶಾಸಕರು ಖುದ್ದು ಭೇಟಿಯಾಗಿ ರಾಜೀನಾಮೆ ನೀಡಬೇಕು ಎಂದವರು ಸ್ಪಷ್ಟಪಡಿಸಿದ್ದಾರೆ.