ಸುಪ್ರೀಂ ಮೆಟ್ಟಿಲೇರಿದ ಅತೃಪ್ತ ಶಾಸಕರು; ನಾಳೆ ಅರ್ಜಿಯ ವಿಚಾರಣೆ

Update: 2019-07-10 05:35 GMT

ಬೆಂಗಳೂರು, ಜು.10: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು  ತಮ್ಮ ರಾಜೀನಾಮೆಯನ್ನು  ಅಂಗೀಕರಿಸಲು ವಿಧಾನಸಭೆಯ   ಸ್ಪೀಕರ್ ರಮೇಶ್ ಕುಮಾರ್  ಅನಗತ್ಯ ವಿಳಂಬ ಮಾಡುತ್ತಿದ್ದಾರೆಂದು  ಅಪಾದಿಸಿ ಸುಪ್ರೀಂ ಕೋರ್ಟ್ ನ  ಮೆಟ್ಟಿಲೇರಿದ್ದಾರೆ.

ಅತೃಪ್ತರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ  ಮುಖ್ಯ ನ್ಯಾಯಮೂರ್ತಿ ಪೀಠದ ಮುಂದೆ ಗುರುವಾರ ನಡೆಯಲಿದೆ.

ಅತೃಪ್ತ ಶಾಸಕರು ಇಂದು ಹಿರಿಯ ವಕೀಲರು ಹಾಗೂ ಮಾಜಿ ಅಟಾರ್ನಿ ಜನರಲ್  ಮುಖುಲ್ ರೋಹ್ಟಗಿ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News