ಬಿ.ಎಲ್.ಸಂತೋಷ್ರನ್ನು ಅಭಿನಂದಿಸಿದ ಬಿಎಸ್ವೈ
Update: 2019-07-15 14:58 GMT
ಬೆಂಗಳೂರು, ಜು. 15: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಿ.ಎಲ್.ಸಂತೋಷ್ ಅವರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ನೂತನವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಸಂತೋಷ್ ಅವರನ್ನು ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿದರು. ಆ ಬಳಿಕ ಬಿಎಸ್ವೈ ಅವರು ಮನೆಯ ಗೇಟ್ವರೆಗೂ ಬಂದು ಸಂತೋಷ್ರನ್ನ ಕಾರು ಹತ್ತಿಸಿ ಬೀಳ್ಕೊಟ್ಟರು.
ರಾಮಲಾಲ್ ಅವರ ಜಾಗಕ್ಕೆ ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂತೋಷ್ ಮತ್ತು ಬಿಎಸ್ವೈ ನಡುವಿನ ಮುಸುಕಿನ ಗುದ್ದಾಟ ತಪ್ಪಿಸಲು ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.