ಮುಂದೆ ಕಾದಿದೆ ನಿಮಗೆ: ಬಿಜೆಪಿಗೆ ಕುಮಾರಸ್ವಾಮಿ ಎಚ್ಚರಿಕೆ

Update: 2019-07-19 07:12 GMT

ಬೆಂಗಳೂರು, ಜು.19: ‘‘ಮುಂಬೈಯಲ್ಲಿರುವವರನ್ನು(ಅತೃಪ್ತ ಶಾಸಕರು)ಕರೆದುಕೊಂಡೇ ಸರಕಾರ ರಚಿಸಿ. ಆಟೋ ರೀತಿ ವಿಮಾನವನ್ನು ಬೆಂಗಳೂರಿನಿಂದ ಮುಂಬೈಗೆ, ಪುಣೆಗೆ ಓಡಾಡಿಸಿದ್ದೀರಿ. ಮುಂದೆ ನಿಮಗೆ ಕಾದಿದೆ’’ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಬಿಜೆಪಿಗೆ ಎಚ್ಚರಿಕೆ ನೀಡಿದರು.

‘‘ಶೆಡ್ಯೂಲ್10-ರ ಬಗ್ಗೆ ನಿನ್ನೆ ಪ್ರಸ್ತಾವ ಆಗಿದೆ. ಇಲ್ಲಿ ಎಲ್ಲವೂ ವಿಸ್ತ್ರತ ಚರ್ಚೆ ಆಗಬೇಕು. ಬಿಜೆಪಿಯವರಿಗೆ ಆತುರವಿದೆ. ವಾಜಪೇಯಿ ವಿಶ್ವಾಸ ಮತ ಮಂಡಿಸುವಾಗ 10 ದಿನ ಕಲಾಪ ನಡೆದಿಲ್ಲವೇ’’ ಎಂದರು.

ಪಕ್ಷಾಂತರ ಎಲ್ಲಿಗೂ ನಡೆಯಬಾರದು. ಬೇರೆ ರಾಜ್ಯಗಳ ಬಗ್ಗೆ ಮಾತನಾಡುವುದಿಲ್ಲ. ಈ ಹಿಂದೆ ಆಡಳಿತ ಪಕ್ಷದ ಶಾಸಕರನ್ನು ಪಕ್ಷಾಂತರ ಮಾಡಿಸಿದ್ದಿಲ್ಲ. ಉಳಿದಂತೆ ಪಕ್ಷಾಂತರ, ಉಪ ಚುನಾವಣೆ ನಡೆದಿವೆ. ಚರ್ಚೆ ನಡೆಯದೆ ವಿಶ್ವಾಸಮತ ಸಾಬೀತುಪಡಿಸುವುದು ಸರಿಯಲ್ಲ. ಇನ್ನೂ ಎರಡು ಮೂರು ದಿನ ಏನಾಗುತ್ತದೋ, ನೋಡೋಣ ಎಂದು ವಿಶ್ವಾಸಮತ ಚರ್ಚೆಯ ಮೇಲೆ ಮಾತನಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News