ಸೋಮವಾರ ಎಲ್ಲದಕ್ಕೂ ಉತ್ತರ ಸಿಗಲಿದೆ: ದಿನೇಶ್ ಗುಂಡೂರಾವ್
Update: 2019-07-20 06:44 GMT
ಬೆಂಗಳೂರು, ಜು.20 ಸದನದಲ್ಲಿ ವಿಶ್ವಾಸಮತ ಚರ್ಚೆ ಸೋಮವಾರ ಅಂತ್ಯವಾಗಲಿದೆ. ಬಹುಮತ ಯಾರಿಗೆ ಎಂಬುದು ಸಾಬೀತಾಗಲಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, ವಿಶ್ವಾಸ ಮತ ಯಾಚನೆ ನಿರ್ಣಯ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ನಾವು ವಿಳಂಬ ಮಾಡಿಲ್ಲ. ಸಂಸದೀಯ ನಡವಳಿಕೆಗಳಲ್ಲಿ ಇದ್ದ ಕೆಲವು ಗೊಂದಲಗಳನ್ನು ಬಗೆಹರಿಸುವ ಹಕ್ಕು ನಮಗಿದೆ. ಸೋಮವಾರ ಎಲ್ಲಕ್ಕೂ ಉತ್ತರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.