ಅತೃಪ್ತ ಶಾಸಕರ ಮನವೊಲಿಕೆಯ ಪ್ರಯತ್ನ ನಡೆದಿದೆ: ಶಾಸಕ ಸಿ.ಎನ್.ಬಾಲಕೃಷ್ಣ

Update: 2019-07-20 16:00 GMT

ಬೆಂಗಳೂರು, ಜು.20: ಮುಂಬೈನಲ್ಲಿರುವ ಅತೃಪ್ತ ಶಾಸಕರ ಮನವೊಲಿಕೆಯ ಪ್ರಯತ್ನ ನಡೆದಿದೆ. ಪಕ್ಷದ ನಾಯಕರು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಸೋಮವಾರ ನಡೆಯುವ ಕಲಾಪಕ್ಕೆ ಆ ಶಾಸಕರು ಬರುವ ವಿಶ್ವಾಸವಿದೆ ಎಂದು ಶ್ರವಣಬೆಳಗೋಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸೋಮವಾರ ವಿಶ್ವಾಸಮತ ಯಾಚಿಸಲಿದ್ದಾರೆ. ಇದರಲ್ಲಿ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ. ಅವರು ಅತ್ಯಂತ ಆತ್ಮವಿಶ್ವಾಸದಿಂದ ಇದ್ದಾರೆ. ಸರಕಾರ ಉರುಳಿಸುವ ಬಿಜೆಪಿ ವಾಮ ಮಾರ್ಗ ಫಲಿಸುವುದಿಲ್ಲ ಎಂದರು.

ಅತೃಪ್ತ ಶಾಸಕರ ಭೇಟಿಗಾಗಿ ಮುಖ್ಯಮಂತ್ರಿ ಮುಂಬೈಗೆ ಹೋಗುವ ಮಾಹಿತಿ ಇಲ್ಲ. ಆದರೆ, ಶಾಸಕರನ್ನು ಕರೆತರಲು ಬೇರೆ ನಾಯಕರು ಮತ್ತೆ ಮುಂಬೈಗೆ ಹೋಗಬಹುದು ಎಂದು ಬಾಲಕೃಷ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News