ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ: ಶಾಸಕ ಮಹೇಶ್
Update: 2019-07-21 08:06 GMT
ಬೆಂಗಳೂರು, ಜು.21: ನಾಳೆಯ ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ. ಮಾಯಾವತಿ ಅವರು ತಟಸ್ಥವಾಗಿರಲು ಸೂಚಿಸಿದ್ದಾರೆ ಎಂದು ಬಿಎಸ್ಪಿ ಶಾಸಕ ಮಹೇಶ್ ಹೇಳಿದ್ದಾರೆ.
ಖಾಸಗಿ ಕೆಲಸಗಳಿಂದಾಗಿ ಕ್ಷೇತ್ರದಲ್ಲಿಯೇ ಇದ್ದು ಸದನಕ್ಕೆ ಹೋಗಲು ಆಗಿಲ್ಲ. ನಮ್ಮ ವರಿಷ್ಟರ ಸೂಚನೆ ಮೇರೆಗೆ ನಾಳೆ ಸದನಕ್ಕೆ ಹೋಗುವುದಿಲ್ಲ ಎಂದವರು ಸ್ಪಷ್ಟವಾಗಿದ್ದಾರೆ.