3 ಬಾರಿಯ ಸಂಸದ, ಸರಳ ರಾಜಕಾರಣಿ ಎ.ಕೆ. ರಾಯ್ ನಿಧನ

Update: 2019-07-21 16:31 GMT

ಧನಬಾದ್(ಜಾರ್ಖಂಡ್),ಜು.21:ಮಾಜಿ ಲೋಕಸಭಾ ಸಂಸದ ಹಾಗೂ ಜಾರ್ಖಂಡ್‌ನ ಪ್ರಾದೇಶಿಕ ಪಕ್ಷ ಮಾರ್ಕ್ಸ್‌ವಾದಿ ಸಮನ್ವಯ ಸಮಿತಿ(ಎಂಸಿಸಿ)ಯ ಸ್ಥಾಪಕ ಎ.ಕೆ.ರಾಯ್(90) ಅವರು ರವಿವಾರ ಇಲ್ಲಿಯ ಆಸ್ಪತೆಯೊಂದರಲ್ಲಿ ನಿಧನರಾದರು. ಅವರು ಅವಿವಾಹಿತರಾಗಿದ್ದರು.

ಹಿರಿಯ ಎಡರಂಗ ನಾಯಕ ಹಾಗು ಸಿಐಟಿಯು ಜಾರ್ಖಂಡ್ ರಾಜ್ಯ ಸಮಿತಿಯ ಮುಖ್ಯ ಪೋಷಕರಾಗಿದ್ದ ಅವರನ್ನು ವೃದ್ಧಾಪ್ಯ ಸಂಬಂಧಿ ಸಮಸ್ಯೆಗಳಿಂದಾಗಿ ಜು.8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

 ಜಾರ್ಖಂಡ್ ಚಳುವಳಿಯ ಸ್ಥಾಪಕರಲೊಬ್ಬರಾಗಿದ್ದ ರಾಯ್ ಮೂರು ಬಾರಿ ಧನಬಾದ್ ಸಂಸದರಾಗಿದ್ದರು. ಅವರು ಮೂರು ಬಾರಿ ಬಿಹಾರ ವಿಧಾನಸಭೆಯ ಶಾಸಕರೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News