ವಿಧಾನಸಭೆ ಕಲಾಪ ಆರಂಭ: ಬಿಜೆಪಿ ಸದಸ್ಯರ ಭಾರೀ ಉತ್ಸಾಹ

Update: 2019-07-23 04:59 GMT

ಬೆಂಗಳೂರು, ಜು.23: ವಿಧಾನಸಭೆಯ ಕಲಾಪ ಬೆಳಗ್ಗೆ 10 ಗಂಟೆಗೆ ಆರಂಭವಾಗಿದ್ದು, ಸ್ಪೀಕರ್ ರಮೇಶ್ ಕುಮಾರ್ ಸರಿಯಾದ ಸಮಯಕ್ಕೆ ಸದನಕ್ಕೆ ಹಾಜರಾಗಿದ್ದರು.

ಸರಕಾರ ಬೀಳುವ ನಿರೀಕ್ಷೆಯಲ್ಲಿರುವ ಬಿಜೆಪಿ ಸದಸ್ಯರುಗಳು ಭಾರೀ ಉತ್ಸಾಹದಿಂದ ಸದನಕ್ಕೆ ಹಾಜರಾಗಿದ್ದಾರೆ. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು 10 ಗಂಟೆ ಕಳೆದರೂ ಸದನಕ್ಕೆ ಹಾಜರಾಗದೇ ನಿರಾಸಕ್ತಿ ತೋರಿದ್ದಾರೆ.

 15 ನಿಮಿಷ ಕಲಾಪವನ್ನು ಮುಂದೂಡಿ. ಎಲ್ಲ ಸದಸ್ಯರು ಸದನಕ್ಕೆ ಹಾಜರಾಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News