ಕರ್ನಾಟಕದಲ್ಲಿ ಮೈತ್ರಿ ಸರಕಾರ ಪತನ: ಬಿಜೆಪಿಗೆ ಪ್ರಿಯಾಂಕಾ ಎಚ್ಚರಿಕೆ

Update: 2019-07-24 09:43 GMT

ಹೊಸದಿಲ್ಲಿ, ಜು.24: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಮಂಗಳವಾರ ವಿಶ್ವಾಸಮತದಲ್ಲಿ ಸೋಲನುಭವಿಸಿದ ಬೆನ್ನಿಗೇ ಮಧ್ಯರಾತ್ರಿ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ.

ಬಿಜೆಪಿಯವರಿಗೆ ಸತ್ಯದ ಅರಿವಾಗುವ ಕಾಲ ಬರುತ್ತದೆ. ಅಲ್ಲಿಯವರೆಗೂ ಜನರು ಬಿಜೆಪಿಯ ಆಟಾಟೋಪಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ಎರಡು ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

 ‘‘ಎಲ್ಲವನ್ನೂ ಖರೀದಿ ಮಾಡಲು ಸಾಧ್ಯವಿಲ್ಲ. ಎಲ್ಲರನ್ನೂ ಬೆದರಿಸಲೂ ಅಸಾಧ್ಯ ಎಂಬ ಸತ್ಯ ಬಿಜೆಪಿಗೆ ಒಂದು ದಿನ ಮನವರಿಕೆಯಾಗುತ್ತದೆ. ಅವರ ಪ್ರತಿಯೊಂದು ಸುಳ್ಳೂ ಒಂದು ದಿನ ಬೆತ್ತಲೆಯಾಗುತ್ತದೆ’’ ಎಂದು ಮೊದಲ ಟ್ವೀಟ್‌ನಲ್ಲಿ ಪ್ರಿಯಾಂಕಾ ತಿಳಿಸಿದ್ದಾರೆ.

ಅಲ್ಲಿಯವರೆಗೂ ಭಾರತದ ಪ್ರಜೆಗಳು ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಜನರ ಹಿತಾಸಕ್ತಿ ರಕ್ಷಿಸಲು ಸ್ಥಾಪಿತವಾದ ಸಂಸ್ಥೆಗಳು ನಾಶವಾಗುವುದನ್ನು ಹಾಗೂ ದಶಕಗಳ ಕಾಲ ಬೆವರು ಹರಿಸಿ ಬಲಿದಾನ ಮಾಡಿ ಬಂದಿರುವ ಪ್ರಜಾತಂತ್ರ ವ್ಯವಸ್ಥೆ ದುರ್ಬಲಗೊಳ್ಳುವುದನ್ನು ನೋಡಿಕೊಂಡಿರಬೇಕಾಗುತ್ತದೆ’’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News