ಒಂದು ವಾರದೊಳಗೆ ಬಹುಮತ ಸಾಬೀತಿಗೆ ಬಿಜೆಪಿಗೆ ರಾಜ್ಯಪಾಲರ ಸೂಚನೆ
Update: 2019-07-26 06:01 GMT
ಬೆಂಗಳೂರು, ಜು.26: ಹೊಸ ಸರಕಾರ ರಚನೆಗೆ ಹಕ್ಕು ಮಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಒಂದು ವಾರದೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ವಜೂಬಾಯಿ ವಾಲಾ ಸೂಚನೆ ನೀಡಿದ್ದಾರೆ.
2018ರಲ್ಲಿ ಯಡಿಯೂರಪ್ಪ ಸರಕಾರ ರಚನೆಗೆ ಹಕ್ಕು ಮಂಡಿಸಿದ ಸಂದರ್ಭದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ 15 ದಿನಗಳ ಕಾಲಾವಕಾಶ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್-ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದವು.
ವಿಧಾನಸಭೆಯಲ್ಲಿ ಸದ್ಯದ ಒಟ್ಟು ಸದಸ್ಯ ಬಲ ಸ್ಪೀಕರ್ ಸೇರಿ 222. ಓರ್ವ ಪಕ್ಷೇತರ ಸದಸ್ಯನ ಬೆಂಬಲ ಸೇರಿ ಬಿಜೆಪಿಯ ಬಲ 106. ಬಹುಮತ ಸಾಬೀತಿಗೆ 112 ಸದಸ್ಯರ ಅಗತ್ಯ ಬಿಜೆಪಿಗಿದೆ.