ಬಿಎಂಟಿಸಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ

Update: 2019-07-29 18:02 GMT

ಬೆಂಗಳೂರು, ಜು.29: ಕಾರು ಸಾಗಲು ಜಾಗ ನೀಡಿಲ್ಲ ಎಂಬ ಕಾರಣಕ್ಕೆ ಬಿಎಂಟಿಸಿ ಬಸ್ ಚಾಲಕನಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕತ್ರಿಗುಪ್ಪೆಯ ಬಿಎಂಟಿಸಿ 13ನೇ ಘಟಕದ ಬಸ್ ಚಾಲಕ ಡಿ.ನವೀನ್ ಎಂಬುವವರೆ ಹಲ್ಲೆಗೊಳಗಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ರವಿವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದ ನವೀನ್, ಸಂಜೆ 5:45 ರ ಸುಮಾರಿಗೆ ಐಟಿಪಿಎಲ್‌ನಿಂದ ಬನಶಂಕರಿಗೆ ಬರುವ ಮಾರ್ಗಮದ್ಯೆ ಜಯಜನಗರ 8ನೆ ಬ್ಲಾಕ್‌ನ ಸಂಗಮ್ ವೃತ್ತದ ಬಳಿ ಬಂದಿದ್ದಾರೆ. ಈ ವೇಳೆ ಕೆಎ 05 ಎಂಎಕ್ಸ್ 5099 ಸಂಖ್ಯೆಯ ಕಾರಿನ ಮಾಲಕ ಬಿಎಂಟಿಸಿ ಬಸ್ ಅನ್ನು ಅಡ್ಡಗಟ್ಟಿದ್ದಾನೆ. ಇದನ್ನು ಪ್ರಶ್ನಿಸಿದ ಕಾರಣ, ನವೀನ್ ಮೇಲೆ ಹಲ್ಲೆ ನಡೆಸಲಾಗಿದೆ, ಬಳಿಕ ಸಾರ್ವಜನಿಕರ ಸಹಾಯದಿಂದ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಜಯನಗರ ಠಾಣಾ ಪೊಲೀಸರು, ದುಷ್ಕರ್ಮಿ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News