ವಿಧಾನಸೌಧದ ಎಲ್ಲ ಸಚಿವರ ಕೊಠಡಿಗಳಿಗೆ ಬೀಗ

Update: 2019-07-30 18:24 GMT

ಬೆಂಗಳೂರು, ಜು.30: ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡ ಬಳಿಕ ಬಿ.ಎಸ್.ಯಡಿಯೂರಪ್ಪನೇತೃತ್ವದಲ್ಲಿ ಹೊಸದಾಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವರ ಎಲ್ಲ ಕೊಠಡಿಗಳಿಗೆ ಬೀಗ ಹಾಕಿ, ಮುದ್ರೆ ಒತ್ತಲಾಗಿದೆ.

ಕಳೆದ 40 ವರ್ಷಗಳ ಹಿಂದೆ ಸಚಿವರ ಕೊಠಡಿಗಳಿಗೆ ಬೀಗ ಹಾಕಿ, ಮುದ್ದೆ ಒತ್ತಿದ್ದರು. ಸಾಮಾನ್ಯವಾಗಿ ಸರಕಾರದ ಕಾಲಾವಧಿ ಮುಗಿದ ತಕ್ಷಣ ಕೊಠಡಿಗಳಿಗೆ ಬೀಗ ಹಾಕಲಾಗುತ್ತದೆ. ಹೊಸ ಸರಕಾರ ರಚನೆ ಆಗಿ ಸಚಿವ ಸ್ಥಾನ ಹಂಚಿಕೆಯಾದ ಮೇಲೆ ತೆರೆಯಲಾಗುತ್ತಿತ್ತು. ಅಲ್ಲಿಯವರೆಗೆ ಡಿಪಿಎಆರ್ ವಶದಲ್ಲಿ ಕೊಠಡಿಗಳು ಇರುತ್ತಿದ್ದವು. ಸಚಿವರ ಕೊಠಡಿಯಲ್ಲಿನ ಪ್ರಮುಖ ಕಡತಗಳು ಕಾಣೆಯಾಗಬಹುದೆಂಬ ಅನುಮಾನ ಎದುರಾಗಿದ್ದರಿಂದ ಈ ರೀತಿ ಬಂದೋಬಸ್ತ್ ಮಾಡಲಾಗಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News