ಪಾಕ್‌ನ ನುಸುಳುವಿಕೆ ಪ್ರಯತ್ನ ಭದ್ರತಾ ಪಡೆಗಳಿಂದ ವಿಫಲ

Update: 2019-08-03 18:48 GMT

ಶ್ರೀನಗರ, ಆ.3: ಜಮ್ಮು-ಕಾಶ್ಮೀರದ ಕೆರನ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಸೇನೆಯ ಬಾರ್ಡರ್ ಆ್ಯಕ್ಷನ್ ಟೀಮ್ (ಬ್ಯಾಟ್) ನಡೆಸಿದ್ದ ನುಸುಳುವಿಕೆ ಪ್ರಯತ್ನವನ್ನು ಈ ವಾರ ವಿಫಲಗೊಳಿಸಿರುವ ಭದ್ರತಾ ಪಡೆಗಳು ಕನಿಷ್ಠ ಐವರು ನುಸುಳುಕೋರರನ್ನು ಬಲಿತೆಗೆದುಕೊಂಡಿವೆ ಎಂದು ಭಾರತೀಯ ಸೇನೆಯು ಶನಿವಾರ ತಿಳಿಸಿದೆ.

ಕೇರನ್ ವಿಭಾಗದಲ್ಲಿಯ ಮುಂಚೂಣಿ ಠಾಣೆಯೊಂದನ್ನು ಗುರಿಯಾಗಿಸಿಕೊಂಡು ಈ ನುಸುಳುವಿಕೆ ಯತ್ನ ನಡೆದಿತ್ತು. ಸೇನೆಯು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿರುವ ಚಿತ್ರಗಳು ನಿಯಂತ್ರಣ ರೇಖೆಯ ಭಾರತೀಯ ಪ್ರದೇಶದಲ್ಲಿ ನುಸುಳುಕೋರರ ಶವಗಳು ಬಿದ್ದಿರುವುದನ್ನು ತೋರಿಸಿವೆ. ಬ್ಯಾಟ್ ತಂಡಗಳು ಸಾಮಾನ್ಯವಾಗಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿ ಅವರನ್ನು ಅಂಗಹೀನರನ್ನಾಗಿಸುತ್ತವೆ ಇಲ್ಲವೇ ಕೊಂದು ಶವವನ್ನು ಛಿದ್ರವಿಚ್ಛಿದ್ರಗೊಳಿಸುತ್ತವೆ.

ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ನಡುವೆಯೇ ಕಳೆದ 36 ಗಂಟೆಗಳ ಅವಧಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News