ಕುಟ್ಯಾಡಿ: ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಇಬ್ಬರು ಮೃತ್ಯು

Update: 2019-08-09 06:41 GMT

ಕುಟ್ಯಾಡಿ, ಆ.9: ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಹೊಳೆಯನ್ನು ದಾಟುತ್ತಿರುವ ಸಂದರ್ಭ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಕುಟ್ಯಾಡಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.

ಮೃತರನ್ನು  ಸಿರಾಜುಲ್ ಹುದಾ  ಮ್ಯಾನೇಜರ್ ಮಾಕುಲ್ ಮುಹಮ್ಮದ್ ಹಾಜಿ ಹಾಗೂ ಸಂಸ್ಥೆಯ ಸಿಬ್ಬಂದಿ ಶರೀಫ್ ಸಖಾಫಿ  ಎಂದು ಗುರುತಿಸಲಾಗಿದೆ.

ಮಾಕುಲ್ ಮುಹಮ್ಮದ್ ಹಾಜಿ ಹಾಗೂ ಶರೀಫ್ ಸಖಾಫಿ ಸಿರಾಜುಲ್ ಹುದಾ ಸಂಸ್ಥೆಯ ಪಕ್ಕದಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಆಗ್ನಿಶಾಮಕ ದಳ, ಸಂಸ್ಥೆಯ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಇಬ್ಬರಿಗಾಗಿ ಹುಡುಗಾಟ ನಡೆಸಿದ್ದಾರೆ. ಬೆಳಗ್ಗೆ 8ಗಂಟೆ ಸುಮಾರಿಗೆ ಇಬ್ಬರ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಕುಟ್ಯಾಡಿಯ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಸಿರಾಜುಲ್ ಹುದಾ ಸಂಸ್ಥೆಯ ರೂವಾರಿ ಪೇರೊಡ್ ಅಬ್ದುರ್ರಹ್ಮಾನ್ ಸಖಾಫಿ ಹಜ್ ಯಾತ್ರೆಯಲ್ಲಿದ್ದು, ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸಿರಾಜುಲ್ ಸಂಸ್ಥೆಯ ಮಸ್ಜಿದ್, ಕಚೇರಿ ಜಲಾವೃತಗೊಂಡಿದೆ. ಪರಿಸರದಲ್ಲಿ ಕೃತಕ ನೆರೆ ಹಾವಳಿಯಿಂದ ಸ್ಥಳೀಯರು ಆತಂಕಿತರಾಗಿದ್ದಾರೆ. ಕಳೆದ ವರ್ಷವೂ ಕೂಡಾ ಇಲ್ಲಿ ಮಳೆ ನೀರಿನಿಂದ ಕುಟ್ಯಾಡಿ ಸುತ್ತಮುತ್ತ ನೆರೆ ಆವರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News