ಸುಲಿಗೆಗೆ ಯತ್ನ ಆರೋಪ: ರೌಡಿ ಉಮೇಶ್ ಸೇರಿ ನಾಲ್ವರ ಬಂಧನ

Update: 2019-08-14 18:47 GMT

ಬೆಂಗಳೂರು, ಆ.14: ಸುಲಿಗೆ ಆರೋಪದಡಿ ರೌಡಿ ಉಮೇಶ್ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ತುಮಕೂರು ಜಿಲ್ಲೆಯ ಪಾವಸಂದ್ರದ ಉಮೇಶ್(37), ಉಲ್ಲಾಳ ಉಪನಗರದ ಸಿದ್ದಾರ್ಥ್(23), ಸುಕಂದಕಟ್ಟೆಯ ನಾಗೇಶ(23), ಕಮಲಾನಗರದ ಮನು(25) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಉಮೇಶ್, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ರೌಡಿ ಪಟ್ಟಿಯಲ್ಲಿದ್ದು, ಈತನ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕೊಲೆ, 1 ಕೊಲೆಯತ್ನ, 1 ಅಪಹರಣ ಪ್ರಕರಣ ದಾಖಲಾಗಿದೆ.

ಸಿದ್ದಾರ್ಥ್ ಹಾಗೂ ನಾಗೇಶ ಕೂಡ ರೌಡಿಪಟ್ಟಿಯಲ್ಲಿದ್ದು, ಆರೋಪಿಗಳ ವಿರುದ್ಧ 1 ಅಪಹರಣ ಪ್ರಕರಣ ದಾಖಲಾಗಿದೆ. ರೌಡಿ ಉಮೇಶ ತನ್ನ ಬಂಧಿತ ಸಹಚರ ರೊಂದಿಗೆ ಮಂಗಳವಾರ ಮಧ್ಯಾಹ್ನ ಅನ್ನಪೂರ್ಣೇಶ್ವರಿ ನಗರದ ನಿರ್ಜನ ಪ್ರದೇಶವೊಂದರಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಸಜ್ಜಾಗಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News