ಎಪಿಸಿಆರ್ ಅಧ್ಯಕ್ಷರಾಗಿ ನ್ಯಾಯವಾದಿ ಉಸ್ಮಾನ್ ಆಯ್ಕೆ

Update: 2019-08-16 09:12 GMT

ಬೆಂಗಳೂರು, ಆ.16: ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಇದರ ಮಹಾಸಭೆಯು ಗುರುವಾರ ಎಪಿಸಿಆರ್ ಬೆಂಗಳೂರು ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯವಾದಿ ಪಿ.ಉಸ್ಮಾನ್ ಅವಿರೋಧವಾಗಿ ಆಯ್ಕೆಯಾದರೆ, ಕಾರ್ಯದರ್ಶಿಯಾಗಿ ನ್ಯಾಯವಾದಿ ಮುಹಮ್ಮದ್ ನಿಯಾಝ್ ಪುನರಾಯ್ಕೆಯಾದರು.

ರಾಜ್ಯ ಸಂಚಾಲಕರಾಗಿ ಆರ್‌ಟಿಐ ಕಾರ್ಯಕರ್ತ ಶೈಖ್ ಶಾಫಿ ಅಹ್ಮದ್, ಖಜಾಂಚಿಯಾಗಿ ಅಬ್ದುಸ್ಸಲಾಂ ಎನ್.ಕೆ., ಮಾಧ್ಯಮ ಪ್ರತಿನಿಧಿಯಾಗಿ ಇನಾಯತುಲ್ಲಾ ಗವಾಯಿ ಆಯ್ಕೆಯಾದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಪಿಸಿಆರ್ ಹಿತೈಷಿ, ಜಮಾಅತೇ ಇಸ್ಲಾಮಿ ಹಿಂದ್ ಇದರ ಕರ್ನಾಟಕ ಘಟಕದ ಡೆಪ್ಯೂಟಿ ಅಮೀರ್ ಮೌಲಾನ ಮುಹಮ್ಮದ್ ಯೂಸುಫ್ ಕುಂಞಿ ಮಾತನಾಡಿ, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಅದಿಲ್ ಪಾಶಾ ಕಿರಾಅತ್ ಪಠಿಸಿದರು.

ಎಪಿಸಿಆರ್ ಕಾರ್ಯಕಾರಿಣಿ ಸಮಿತಿಯ ಸದಸ್ಯರು, ನ್ಯಾಯವಾದಿ ನಾಗೇ ಗೌಡ ಮೈಸೂರು, ತಾಜುದ್ದೀನ್ ತುಮಕೂರು, ಮುಹಮ್ಮದ್ ಫಝಲ್ ಬೆಂಗಳೂರು ಸಭೆಯಲ್ಲಿ ಉಪಸ್ಥಿತರಿದ್ದರು.

ನ್ಯಾಯವಾದಿ ಮುಹಮ್ಮದ್ ನಿಯಾಝ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News