ಕ್ಯಾಬಿನೆಟ್ ವಿಸ್ತರಣೆ ಮಂಗಳವಾರ: ಸಿಎಂ ಯಡಿಯೂರಪ್ಪ

Update: 2019-08-18 05:27 GMT

ಬೆಂಗಳೂರು, ಆ. 18: ಕ್ಯಾಬಿನೆಟ್ ವಿಸ್ತರಣೆ ಸೋಮವಾರ ಅಲ್ಲ, ಮಂಗಳವಾರ. ಅಂದು ಸಂಜೆ 3-4 ಗಂಟೆಯ ಸುಮಾರಿಗೆ  ಕ್ಯಾಬಿನೆಟ್ ರಚನೆ ಅಂತಿಮವಾಗಲಿದೆ. ಈ ಬಗ್ಗೆ ಅಮಿತ್ ಷಾ ಜೊತೆ ಮಾತನಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 13 - 14 ಮಂದಿ ಸಚಿವ ಸಂಪುಟ ಸೇರಿಕೊಳ್ಳಲಿದ್ದಾರೆ ಎಂದೂ ಹೇಳಿದರು.

ನೆರೆ ಹಾನಿ ಪ್ರದೇಶಗಳ ಕುರಿತು ಸುದೀರ್ಘವಾಗಿ ಪ್ರಧಾನಿ ಮತ್ತು ಗೃಹಸಚಿವರ ಜೊತೆ ಚರ್ಚೆ ಆಗಿದೆ. ಇನ್ನೊಂದೆರಡು ದಿನದಲ್ಲಿ ಪರಿಹಾರ ಕಾರ್ಯ ಚುರುಕಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News