ಸಚಿವ ಸ್ಥಾನಕಾಂಕ್ಷಿಗಳ ಜತೆ ಯಡಿಯೂರಪ್ಪ ಸಭೆ

Update: 2019-08-19 05:06 GMT

ಬೆಂಗಳೂರು, ಆ.19: ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟ ಮಂಗಳವಾರ ರಚನೆಯಾಗಲಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಜೊತೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗ್ಗೆ ಸಭೆ ನಡೆಸಿದರು.

ಡಾಲರ್ಸ್‌ ಕಾಲನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಸುನೀಲ್ ಕುಮಾರ್, ಪ್ರಭು ಚೌಹಾಣ್, ಅಶ್ವಥ ನಾರಾಯಣ ಉಪಸ್ಥಿತರಿದ್ದರು.

ಈ ನಡುವೆ ನೂತನ ಸಚಿವರ ಅಂತಿಮ ಪಟ್ಟಿಯನ್ನು ಇಂದು ಸಂಜೆ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದು, ಹೈಕಮಾಂಡ್ ನಿಂದ ಅಂತಿಮ ಪಟ್ಟಿಗಾಗಿ ಅವರು ಕಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News