ಐಎಂಎ ವಂಚನೆ‌ ಪ್ರಕರಣ: ಮನ್ಸೂರ್ ಖಾನ್‍ ಆಪ್ತ ಬಂಧನ

Update: 2019-08-20 17:16 GMT

ಬೆಂಗಳೂರು, ಆ.20: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನ್ಸೂರ್ ಖಾನ್‍ನ ಆಪ್ತ ಖಮರುಲ್ಲಾ ಜಮಾಲ್(40) ಎಂಬಾತನನ್ನು ಸಿಟ್ ಮಂಗಳವಾರ ಬಂಧಿಸಿದೆ.

ಬಂಧಿತ ಖಮರುಲ್ಲಾ ಜಮಾಲ್ ಐಎಂಎ ಹೂಡಿಕೆದಾರರ ಹಣದಿಂದ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 1.5 ಎಕರೆ ಜಮೀನು ಖರೀದಿ ಮಾಡಿ, ಸಿಮೆಂಟ್ ಬ್ಲಾಕ್‍ಗಳನ್ನು ತಯಾರು ಮಾಡುವ ಕಾರ್ಖಾನೆಯನ್ನು ನಡೆಸುತ್ತಿದ್ದ ಎಂದು ಸಿಟ್ ಹೇಳಿದೆ.

ಖಮರುಲ್ಲಾ ಜಮಾಲ್ ಐಎಂಎ ಗ್ರೂಪ್ ಆಫ್ ಕಂಪೆನಿ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದ. ಮನ್ಸೂರ್ ಖಾನ್ ಬಳಿ ಬಂದು ಸೇರುತ್ತಿದ್ದ ಹಣವನ್ನು ಗೌಪ್ಯವಾಗಿ, ಇದೇ ಉದ್ದೇಶಕ್ಕಾಗಿ ತಯಾರಿಸಲಾಗಿದ್ದ ಬಂಕರ್ ಗಳಲ್ಲಿ ಮುಚ್ಚಿಡುತ್ತಿದ್ದ. ಅದನ್ನು ಕಾಯಲು ಗನ್ ಮ್ಯಾನ್‍ಗಳನ್ನು ನೇಮಕ ಮಾಡಿಕೊಂಡಿದ್ದ ಎಂದು ಸಿಟ್ ತನಿಖಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News