ಸಿಎಂ ಪರಿಹಾರ ನಿಧಿಗೆ ಹರಿದು ಬಂದ ದೇಣಿಗೆ

Update: 2019-08-22 12:54 GMT

ಬೆಂಗಳೂರು, ಆ. 22: ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಉದ್ಯಮಿಗಳು, ಚಿತ್ರನಟರು ಹಾಗೂ ಸಂಘ-ಸಂಸ್ಥೆಗಳು ದೊಡ್ಡ ಮೊತ್ತದ ದೇಣಿಗೆ ನೀಡುತ್ತಿದ್ದು, ಟಿವಿಎಸ್ ಮೋಟಾರ್ಸ್, ನಟ ಉಪೇಂದ್ರ ಸೇರಿದಂತೆ ಹಲವರು ಸಿಎಂಗೆ ಪರಿಹಾರ ಚೆಕ್ ಹಸ್ತಾಂತರಿಸಿದರು.

ಗುರುವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಿಎಂ ಕಚೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಟಿವಿಎಸ್ ಮೋಟಾರ್ಸ್ ಉಪಾಧ್ಯಕ್ಷ ವಿ.ಆರ್.ಕರುಣಾಕರ ರೆಡ್ಡಿ 1 ಕೋಟಿ ರೂ.ಪರಿಹಾರ ಚೆಕನ್ನು ಸಿಎಂಗೆ ಸಲ್ಲಿಸಿದರು.

ಚಿತ್ರನಟ, ನಿರ್ದೇಶಕ ಉಪೇಂದ್ರ ಅವರು ಸಿಎಂ ಪರಿಹಾರ ನಿಧಿಗೆ 5ಲಕ್ಷ ರೂ.ಚೆಕ್ ನೀಡಿದರು. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ಅವರು ಸಿಎಂ ಪರಿಹಾರ ನಿಧಿಗೆ 17.51 ಲಕ್ಷ ರೂ.ದೇಣಿಗೆ ಚೆಕ್ ನೀಡಿದರು.

ಇದೇ ವೇಳೆ ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ, ಸಿಎಂ ಪರಿಹಾರ ನಿಧಿಗೆ 16.25 ಲಕ್ಷ ರೂ.ಮೊತ್ತದ ಚೆಕ್ ಅನ್ನು ಸ್ವೀಕರಿಸಿದರು. ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ವತಿಯಿಂದ 50 ಲಕ್ಷ ರೂ.ದೇಣಿಗೆಯನ್ನು ಸಿಎಂ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News