ಗಾಂಜಾ ಮಾರಾಟ ಆರೋಪ: ಓರ್ವ ಸೆರೆ

Update: 2019-08-25 13:59 GMT

ಬೆಂಗಳೂರು, ಆ.25: ರಸ್ತೆ ಬದಿಯ ಡಾಬಾಗಳ ಬಳಿ ಲಾರಿ ಚಾಲಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

ಪಂಜಾಬ್ ಮೂಲದ ಜಗತಾರ್ ಸಿಂಗ್ ಎಂಬಾತ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶದಿಂದ ಬರುತ್ತಿದ್ದ ಲಾರಿ ಚಾಲಕರಿಂದ ಗಾಂಜಾ ಪಡೆದು ಬೆಂಗಳೂರಿನ ಉತ್ತರ ತಾಲೂಕಿನ ದಾಸನಪುರದ ಡಾಬಾಗಳ ಬಳಿ ಈತ ಬೇರೆ ಲಾರಿ ಚಾಲಕರಿಗೆ ಗಾಂಜಾ ಮಾರುತ್ತಿದ ಎನ್ನಲಾಗಿದ್ದು, ಬಂಧಿತನಿಂತ 1 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News