ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಒಂದು ತಿಂಗಳು ಪೂರ್ಣ
Update: 2019-08-26 04:54 GMT
ಬೆಂಗಳೂರು, ಆ.26: ಬಿಎಸ್ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ ಒಂದು ತಿಂಗಳು ಪೂರ್ಣವಾಗಿದೆ. ಯಡಿಯೂರಪ್ಪ ಸಂಪುಟಕ್ಕೆ 17 ಸಚಿವರು ಸೇರ್ಪಡೆಯಾಗಿದ್ದರೂ, ಇನ್ನೂ ಖಾತೆ ಹಂಚಿಕೆ ಮಾಡಲಾಗಿಲ್ಲ. ಇಂದು ಖಾತೆ ಹಂಚಿಕೆ ಮಾಡಲಾಗುವುದು ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.
ಆರ್ಎಸ್ಎಸ್ ಸೂಚನೆಯ ಮೇರೆಗೆ ನಾಳೆ ಸಂಪುಟ ವಿಸ್ತರಣೆಯಾಗಲಿದ್ದು, ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಶಾಸಕರ ಅಸಮಾಧಾನ ತಣಿಸಲು ಯತ್ನಿಸಲಾಗುತ್ತದೆ ಎನ್ನಲಾಗಿದೆ.