ದರೋಡೆಗೆ ಯತ್ನ ಆರೋಪ: ಐವರ ಬಂಧನ

Update: 2019-09-09 18:22 GMT

ಬೆಂಗಳೂರು, ಸೆ.9: ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಡಿ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಬ್ಯಾಡರಹಳ್ಳಿ ನಿವಾಸಿ ರೌಡಿಶೀಟರ್ ರವಿ(24) ಮತ್ತು ಆತನ ಸಹಚರರಾದ ಪ್ರತಾಪ, ಅಮೃತ್, ಸತೀಶ್(23), ನವೀನ್ ಕುಮಾರ್(23) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಮೆಟ್ರೋ ಲೇಔಟ್ ಅಂಡರ್ ಬ್ರಿಡ್ಜ್ ಹತ್ತಿರ ಸಾರ್ವಜನಿಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರಿಂದ ನಗದು-ಚಿನ್ನದ ಆಭರಣ ದೋಚಲು ಸಜ್ಜಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಒಂದು ಕಾರು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News