ರಾಜ್ಯ ಜಾಹೀರಾತು ನೀತಿ ಪರಿಷ್ಕರಣೆಗೆ ಸಲಹೆಗಳ ಆಹ್ವಾನ

Update: 2019-09-13 16:34 GMT

ಬೆಂಗಳೂರು, ಸೆ.13: ರಾಜ್ಯದ ಜಾಹೀರಾತು ನೀತಿ- 2013 ಅನುಷ್ಠಾನ ನಿಯಮಗಳು 2014 ಜಾರಿಗೆ ಬಂದು ಐದು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿಯಮಗಳನ್ನು ಪರಿಷ್ಕರಿಸಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಜಾಹೀರಾತು ನೀತಿ-2013 ಅನುಷ್ಠಾನ ನಿಯಮಗಳು 2014 ರ ಪರಿಷ್ಕರಣೆ ಸಂಬಂಧ ರಾಜ್ಯದಲ್ಲಿರುವ ಪತ್ರಿಕಾ ಸಂಘಟನೆಗಳಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ.

ಜಾಹೀರಾತು ಅನುಷ್ಠಾನ ನಿಯಮಗಳ ಪರಿಷ್ಕರಣೆ ಸಂಬಂಧ ಸಲಹೆಗಳನ್ನು ಲಿಖಿತವಾಗಿ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ಸಂಖ್ಯೆ 17, ಭಗವಾನ್ ಮಹಾವೀರ ರಸ್ತೆ, ( ಇನ್‌ಫೆಂಟ್ರಿ ರಸ್ತೆ ) ಬೆಂಗಳೂರು - 560 001 ಅವರಿಗೆ ಸೆ.30 ರೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News