ಆದಿತ್ಯ ಠಾಕ್ರೆಯನ್ನು ‘ಶಿವಸೇನೆಯ ರಾಹುಲ್‍ ಗಾಂಧಿ’ ಎಂದ ‘ಆಜ್ ತಕ್’ ನಿರೂಪಕಿ

Update: 2019-09-22 12:39 GMT

ಹೊಸದಿಲ್ಲಿ, ಸೆ.22: ಮೈಕ್ ಆನ್ ಆಗಿರುವುದರ ಅರಿವಿಲ್ಲದೆ ಹಿಂದಿ ಸುದ್ದಿವಾಹಿನಿ ‘ಆಜ್ ತಕ್’ ನಿರೂಪಕಿ ಅಂಜನಾ ಓಂ ಕಶ್ಯಪ್ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆಯವರನ್ನು ‘ಶಿವಸೇನೆಯ ರಾಹುಲ್‍ ಗಾಂಧಿ’ ಎಂದು ಹೇಳಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಸುದ್ದಿ ಓದಿದ ನಂತರ ಮೈಕ್ ಆನ್ ಆಗಿರುವುದು ನಿರೂಪಕಿಯ ಗಮನಕ್ಕೆ ಬಂದಿರಲಿಲ್ಲ. ವಿಡಿಯೋ ವೈರಲ್ ಆದ ಬಳಿಕ ನಿರೂಪಕಿ ಅಂಜನಾ ಓಂ ಕಶ್ಯಪ್ ಕ್ಷಮೆಯಾಚಿಸಿದ್ದಾರೆ.

ಆದಿತ್ಯ ಠಾಕ್ರೆಯ ವಿಡಿಯೊ ತುಣುಕು ಪರದೆಯಲ್ಲಿ ಪ್ರಸಾರವಾಗುತ್ತಿದ್ದಾಗ ಕಶ್ಯಪ್, ‘ಈತ ಶಿವಸೇನೆಯ ರಾಹುಲ್‍ ಗಾಂಧಿ’ ಎಂದು ಹೇಳಿದ್ದರು. ತಮ್ಮ ಧ್ವನಿ ಪ್ರೇಕ್ಷಕರಿಗೆ ಕೇಳುತ್ತದೆ ಎನ್ನುವುದು ಗಮನಕ್ಕೆ ಬಾರದೇ ಕಶ್ಯಪ್ ಈ ಹೇಳಿಕೆ ನೀಡಿದ್ದರು.

ಬಳಿಕ ಈ ಬಗ್ಗೆ ನಿರೂಪಕಿ ಕ್ಷಮೆ ಯಾಚಿಸಿದರು. ಇದು ತೀರ್ಮಾನವಲ್ಲ; ನಾನು ಕ್ಷಮೆ ಯಾಚಿಸುತ್ತೇನೆ. ಯಾವುದೇ ರೀತಿಯಲ್ಲಿ ಇದು ವಾಹಿನಿಯ ಅಥವಾ ಟಿವಿ ಜಾಲದ ಅಭಿಪ್ರಾಯವನ್ನು ಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News