ಬೆಂಗಳೂರು: ಕ್ಷುಲಕ ಕಾರಣಕ್ಕೆ ಭದ್ರತಾ ಸಿಬ್ಬಂದಿಯ ಕೊಲೆ

Update: 2019-10-08 18:01 GMT

ಬೆಂಗಳೂರು, ಅ.8: ಕ್ಷುಲಕ ಕಾರಣಕ್ಕೆ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಕೊಲೆಗೈದಿರುವ ಘಟನೆ ಇಲ್ಲಿನ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಸ್ತೂರಿ ನಗರದ ನೇಪಾಳ ಮೂಲದ ರಾಜೇಂದ್ರ ಬಿಸ್ವಾ (27) ಕೊಲೆಯಾಗಿರುವ ಭದ್ರತಾ ಸಿಬ್ಬಂದಿ ಎಂದು ತಿಳಿದುಬಂದಿದೆ. ರಾಜೇಂದ್ರ ಬಿಸ್ವಾ ಅವರಿಗೆ ಭೀಮ ಬಿಸ್ವಾ ಮತ್ತು ಅಮಿತ್ ಸ್ನೇಹಿತರಿದ್ದು, ಈ ಇಬ್ಬರು ಸಂಬಂಧಿಗಳನ್ನೇ ವಿವಾಹವಾಗಿದ್ದಾರೆ. ಇತ್ತೀಚೆಗೆ ಅಮಿತ್ ಪತ್ನಿಯಿಂದ ದೂರವಿದ್ದ. ಈ ವಿಚಾರವಾಗಿ ರಾಜೇಂದ್ರ ಬಿಸ್ವಾ ನಡುವೆ ಜಗಳವಾಗಿದ್ದು, ಸೋಮವಾರ ಸಂಜೆ ಆರೋಪಿ ಅಮಿತ್ ಸೇರಿದಂತೆ ನಾಲ್ವರ ತಂಡ, ರಾಜೇಂದ್ರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ, ರಾಜೇಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಸಂಬಂಧ ರಾಮಮೂರ್ತಿನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News