3 ಸಿನೆಮಾಗಳು 120 ಕೋಟಿ ರೂ. ಗಳಿಸಿದೆ, ದೇಶದಲ್ಲಿ ಆರ್ಥಿಕ ಹಿಂಜರಿತವಿಲ್ಲ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

Update: 2019-10-12 12:43 GMT

ಹೊಸದಿಲ್ಲಿ, ಅ.12: ಅಕ್ಟೋಬರ್ 2ರಂದು ಬಿಡುಗಡೆಯಾದ 3 ಸಿನೆಮಾಗಳು 120 ಕೋಟಿ ರೂ.ಗಳನ್ನು ಗಳಿಸಿದೆ. ಭಾರತದಲ್ಲಿ ಆರ್ಥಿಕ ಹಿಂಜರಿತವಿಲ್ಲ ಎನ್ನುವುದಕ್ಕೇ ಇದೇ ಸಾಕ್ಷಿ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಹಿಂಜರಿತದ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದರು. ಅಕ್ಟೋಬರ್ 2ರಂದು ಬಿಡುಗಡೆಯಾದ 3 ಸಿನೆಮಾಗಳು 120 ಕೋಟಿ ರೂ.ಗಳನ್ನು ಗಳಿಸಿದೆ ಎಂದರು.

"ನಾನು ವಾಜಪೇಯಿ ಸರಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವನಾಗಿದ್ದೆ. ಸಿನೆಮಾಗಳು ಭಾರೀ ಹಣ ಗಳಿಸುತ್ತಿದೆ. ಅ.2ರಂದು ಮೂರು ಸಿನೆಮಾಗಳು ಬಿಡುಗಡೆಯಾಗಿದೆ. ಈ ಸಿನೆಮಾಗಳು 120 ಕೋಟಿ ರೂ. ಗಳಿಸಿದೆ ಎಂದು ನನಗೆ ಸಿನೆಮಾ ವಿಮರ್ಶಕ ಕೋಮಲ್ ನಹ್ತಾ ಹೇಳಿದ್ದಾರೆ. ಒಳ್ಳೆಯ ಆರ್ಥಿಕತೆಯಿದ್ದ ದೇಶದಲ್ಲಿ ಮಾತ್ರ 120 ಕೋಟಿ ರೂ. ಗಳಿಕೆಯಾಗುತ್ತದೆ" ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News