ಬೆಂಗಳೂರು: ಸಿಎಂ ಯಡಿಯೂರಪ್ಪ ಕಾರ್ಯಕ್ರಮವನ್ನು ಬಹಿಷ್ಕರಿಸಿದ ದೃಶ್ಯ ಮಾಧ್ಯಮ
Update: 2019-10-13 07:00 GMT
ಬೆಂಗಳೂರು, ಅ.13: ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಮಾಧ್ಯಮದವರು ಬಹಿಷ್ಕರಿಸಿದ ಪ್ರಸಂಗ ನಡೆದಿದೆ.
ರವಿವಾರ ವಾಲ್ಮೀಕಿ ಜಯಂತಿಯ ಪ್ರಯುಕ್ತ ನಗರದ ಶಾಸಕ ಭವನದ ಮುಂಭಾಗವಿರುವ ವಾಲ್ಮೀಕಿ ಪ್ರತಿಮೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಲಾರ್ಪಣೆ ಮಾಡುವ ಸಂದರ್ಭ ಚಿತ್ರೀಕರಣಕ್ಕೆ ಟಿವಿ ಮಾಧ್ಯಗಳಿಗೆ ಅವಕಾಶ ಕೊಡಲಿಲ್ಲ ಎನ್ನಲಾಗಿದ್ದು, ಹೀಗಾಗಿ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಮಾಧ್ಯಮದವರು ಬಹಿಷ್ಕರಿಸಿದ್ದಾರೆ.