ಪಿಸ್ತೂಲು ತೋರಿಸಿ ಬಡ್ಡಿ ಹಣ ವಸೂಲಿ ಆರೋಪ: ವ್ಯಕ್ತಿ ಸೆರೆ

Update: 2019-10-20 15:09 GMT

ಬೆಂಗಳೂರು, ಅ.20: ಪಿಸ್ತೂಲು ತೋರಿಸಿ ಬಡ್ಡಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ವ್ಯಕ್ತಿಯೊರ್ವನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ನಗರದ ನಿವಾಸಿ ಮಂಜುನಾಥ್ ಯಾನೆ ಫೈನಾನ್ಸ್ ಮಂಜು ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಆರೋಪಿ ಮಂಜುನಾಥ್, ಬಡ್ಡಿ ವ್ಯವಹಾರ ಕೆಲಸ ಮಾಡುತ್ತಿದ್ದು, ಹಲವರಿಗೆ ಬಡ್ಡಿಗೆ ಹಣ ನೀಡುತ್ತಿದ್ದ. ಆದರೆ, ಕೆಲವರು ಬಡ್ಡಿ ಹಣ ನೀಡಲು ನಿರಾಕರಣೆ ಮಾಡಿದಾಗ ಅನಧಿಕೃತವಾಗಿ ಖಾಸಗಿ ಪಿಸ್ತೂಲು ಮೂಲಕ ಬೆದರಿಸಿ ಬಡ್ಡಿ ಹಣ ವಸೂಲಿ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ, ಅಕ್ರಮ ಆಯುಧ ಬಳಸಿದ್ದ ಆರೋಪದಡಿ ಇಲ್ಲಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News