ರೈಲು ಢಿಕ್ಕಿ: ನಾಲ್ವರು ವಿದ್ಯಾರ್ಥಿಗಳು ಸಾವು

Update: 2019-11-14 17:57 GMT
ಸಾಂದರ್ಭಿಕ ಚಿತ್ರ,  ಫೋಟೊ ಕೃಪೆ:  Hemani Bhandari

ಕೊಯಂಬತ್ತೂರು, ನ. 14: ಮದ್ಯಪಾನ ಮಾಡಿ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಎಕ್ಸ್‌ಪ್ರೆಸ್ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಇಲ್ಲಿ ಗುರುವಾರ ನಡೆದಿದೆ.

 ನಗರದಲ್ಲಿರುವ ಕಾಲೇಜಿನ ಸಮೀಪ ಬುಧವಾರ ಐವರು ಮದ್ಯಪಾನ ಮಾಡಿ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ. ಆಲಪ್ಪುಳ-ಚೆನ್ನೈ ರೈಲು ಆಗಮಿಸುತ್ತಿದ್ದುದನ್ನು ಅವರು ಗಮನಿಸಲಿಲ್ಲ. ಇದರಿಂದ ರೈಲು ಢಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ಇನ್ನೋರ್ವ ಗಂಭೀರ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರು 21ರಿಂದ 23 ಪ್ರಾಯದ ನಡುವಿನ ಯುವಕರು. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News