ರಿಲಯನ್ಸ್ ಕಮ್ಯುನಿಕೇಷನ್ಸ್ ನಿರ್ದೇಶಕ ಹುದ್ದೆಗೆ ಅನಿಲ್ ಅಂಬಾನಿ ರಾಜೀನಾಮೆ

Update: 2019-11-16 13:45 GMT

ಹೊಸದಿಲ್ಲಿ, ನ.16: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಿಲಯನ್ಸ್ ಕಮ್ಯುನಿಕೇಶನ್ಸ್(ಆರ್‌ಕಾಮ್)ನ ನಿರ್ದೇಶಕ ಹುದ್ದೆಗೆ ಅನಿಲ್ ಅಂಬಾನಿ ರಾಜೀನಾಮೆ ನೀಡಿರುವುದಾಗಿ ಸಂಸ್ಥೆ ಶನಿವಾರ ಪ್ರಕಟಿಸಿದೆ.

ಅಂಬಾನಿಯ ಜೊತೆಗೆ, ಛಾಯಾ ವಿರಾನಿ, ರೀನಾ ಕರಾನಿ, ಮಂಜರಿ ಕಕರ್, ಸುರೇಶ್ ರಂಗಾಚಾರ್ ಕೂಡಾ ನಿರ್ದೇಶಕ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದಾಗಿ ಸಂಸ್ಥೆಯ ಹೇಳಿಕೆ ತಿಳಿಸಿದೆ.

ಜೊತೆಗೆ, ಮಣಿಕಂಠನ್ ವಿ ಕೂಡಾ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಎಲ್ಲಾ ರಾಜೀನಾಮೆ ಪತ್ರಗಳನ್ನು ಸಂಸ್ಥೆಯ ಕ್ರೆಡಿಟರ್ಸ್ (ಸಾಲ ಕೊಟ್ಟವರ) ಸಮಿತಿಯ ಪರಿಶೀಲನೆಗೆ ಇಡಲಾಗುವುದು ಎಂದು ಹೇಳಿಕೆ ತಿಳಿಸಿದೆ. ದಿವಾಳಿತನ ಪ್ರಕ್ರಿಯೆಯಲ್ಲಿರುವ ಆರ್‌ಕಾಮ್ ಸಂಸ್ಥೆ 2019ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 30,142 ಕೋಟಿ ರೂ. ನಷ್ಟ ಅನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News