ಕಾರು ಕಳವು ಪ್ರಕರಣ: ಯುವಕನ ಬಂಧನ
Update: 2019-11-16 18:17 GMT
ಬೆಂಗಳೂರು, ನ.16: ಕೆಲಸ ಮಾಡುತ್ತಿದ್ದ ಗ್ಯಾರೇಜ್ನ ಮಾಲಕರ ಕಾರು ಕಳವು ಮಾಡಿದ್ದ ಆರೋಪದಡಿ ಯುವಕನನ್ನು ಬಂಧಿಸಿರುವ ಶ್ರೀರಾಂಪುರ ಠಾಣಾ ಪೊಲೀಸರು, 6 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದ್ಟಾರೆ.
ತಮಿಳುನಾಡು ಮೂಲದ ಕಾಮರಾಜ್ (57) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಷಾದ್ರಿಪುರಂ ಪ್ಲಾಟ್ಫಾರಂ ರಸ್ತೆಯಲ್ಲಿರುವ ದೇವಾ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ನ.6ರ ರಾತ್ರಿ ಕಳವು ಮಾಡಿ ಪರಾರಿಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ದೇವಾ ಅವರು ನಡೆಸುತ್ತಿದ್ದ ಶೇಷಾದ್ರಿಪುರಂನ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರನ್ನು ರಿಪೇರಿ ಮಾಡುವ ಸಲುವಾಗಿ ಮನೆಗೆ ಹೋಗಿದ್ದಾಗ ದೇವಾ ಅವರಿಗೆ ಗೊತ್ತಿಲ್ಲದೆ ಕಾರಿನ ಕೀಯನ್ನು ಕಳವು ಮಾಡಿಕೊಂಡು ಬಂದು ಸ್ವಲ್ಪ ದಿನಗಳ ನಂತರ ಕಾರನ್ನು ಕಳವು ಮಾಡಿ ಪರಾರಿಯಾಗಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.