ಇಂದಿರಾ ಗಾಂಧಿಯಂತಹ ಮಾತೃ ಹೃದಯದ ನಾಯಕರ ಅಗತ್ಯ: ಸಿದ್ದರಾಮಯ್ಯ

Update: 2019-11-19 17:35 GMT

ಬೆಂಗಳೂರು, ನ.19: ಭಾರತಕ್ಕೆ ಇಂದು ಬೇಕಾಗಿರುವುದು ಬಡತನ, ಕಣ್ಣೀರು, ಕಷ್ಟಗಳನ್ನು ಕಂಡಾಗ ಇಂದಿರಾಗಾಂಧಿಯವರಂತೆ ಮಾತೃ ಹೃದಯದಿಂದ ಮರುಗುವ, ಸ್ಪಂದಿಸುವ ಹೃದಯವಂತ ನಾಯಕರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಗರೀಬಿ ಹಟಾವೋ’ ಅವರಿಗೆ ಕೇವಲ ಘೋಷಣೆಯಾಗಿರಲಿಲ್ಲ, ಅವರ ರಾಜಕೀಯ ಜೀವನದ ಬದ್ಧತೆಯಾಗಿತ್ತು. ಅವರ ಬದುಕು- ಸಾಧನೆ ನಮಗೆಲ್ಲ ಪ್ರೇರಣೆ. ನಮ್ಮ ಸರಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ, ಸವಿರುಚಿ ಕ್ಯಾಂಟೀನ್ ಮೊದಲಾದ ಯೋಜನೆಗಳು ಇಂದಿರಾಗಾಂಧಿಯವರ ಕಾಳಜಿಪೂರ್ಣ ಚಿಂತನೆಗಳಿಂದ ಪ್ರೇರಿತ. ಹುಟ್ಟುಹಬ್ಬದ ದಿನ ಅವರ ಚಿಂತನೆಗಳನ್ನು ಮನನ ಮಾಡಿಕೊಳ್ಳೋಣ ಎಂದು ಅವರು ಕೋರಿದ್ದಾರೆ.

ಬಡವರಿಗಾಗಿ ತಾಯಿಯಂತೆ ಮರುಗುತ್ತಿದ್ದ, ಆಂತರಿಕ-ಬಾಹ್ಯ ಶತ್ರುಗಳ ಎದುರು ‘ದುರ್ಗಿ’ಯಂತೆ ಸೆಣಸುತ್ತಿದ್ದ, ದೇಶದ ಏಕತೆ-ಸಮಗ್ರತೆಗಾಗಿ ಪ್ರಾಣವನ್ನೇ ತ್ಯಾಗಮಾಡಿದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಅವರ ಜನ್ಮದಿನದಂದು ಗೌರವದಿಂದ ನೆನೆಯೋಣ, ಅವರು ತೋರಿದ ದಾರಿಯಲ್ಲಿ ಮುನ್ನಡೆಯೋಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News