ಟಿಡಿಆರ್ ಹಗರಣ ಪ್ರಕರಣ: ಬಿಬಿಎಂಪಿ ಕಚೇರಿಗೆ ಬಂದ ಆರೋಪಿ

Update: 2019-11-19 17:42 GMT

ಬೆಂಗಳೂರು, ನ.19: ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್) ವಂಚನೆ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸಿಬಿ ತನಿಖಾಧಿಕಾರಿಗಳು, ಪ್ರಕರಣದ ಮುಖ್ಯ ಆರೋಪಿ ಕೃಷ್ಣಾಲಾಲ್‌ನನ್ನು ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳದ ಮಹಜರು ಮಾಡಿದರು.

ಪ್ರಾಥಮಿಕ ಹಂತವಾಗಿ ಆರೋಪಿಯನ್ನು ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳದ ಮಹಜರು ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News