"ಮುಂಬೈಯಲ್ಲಿ ಅಷ್ಟು ಸಮಸ್ಯೆಯಿಲ್ಲ": ವಾಯು ಮಾಲಿನ್ಯ ಚರ್ಚೆ ಸಭೆಗೆ ಗೈರಾಗಿದ್ದಕ್ಕೆ ಸಂಸದೆ ಹೇಮಾಮಾಲಿನಿ ವಿವರಣೆ

Update: 2019-11-20 11:11 GMT

ಮುಂಬೈ: ವಾಯು ಮಾಲಿನ್ಯ ಸಮಸ್ಯೆ ಚರ್ಚಿಸಲು ಆಯೋಜಿಸಲಾಗಿದ್ದ ಮಹತ್ವದ ಸಂಸದೀಯ ಸಮಿತಿಯ ಸಭೆಗೆ ಗೈರಾಗಿ ಸಭೆಯ ರದ್ದತಿಗೆ ಕಾರಣರಾಗಿದ್ದ 25 ಸಂಸದರಲ್ಲಿ ಒಬ್ಬರಾಗಿರುವ ಮಥುರಾ ಕ್ಷೇತ್ರದ ಬಿಜೆಪಿ ಸಂಸದೆ ಹಾಗೂ ಹಿರಿಯ ನಟಿ ಹೇಮಾಮಾಲಿನಿ ತಾವು ಗೈರಾಗಿದ್ದಕ್ಕೆ ನೀಡಿದ ವಿವರಣೆ ಹಲವರ ಹುಬ್ಬೇರಿಸಿದೆ. ಲೋಕಸಭೆಯಲ್ಲಿ ಈ ವಿಚಾರ ಕುರಿತಂತೆ ನಡೆದ ಚರ್ಚೆಯಲ್ಲೂ ಬೆರೆಳೆಣಿಕೆಯ ಸದಸ್ಯರು ಭಾಗವಹಿಸಿದ್ದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ಹೇಮಾ ಮಾಲಿನಿ "ಈ ಸಮಸ್ಯೆಗೆ ಸಂಬಂಧಿಸಿದವರು ಹಾಗೂ ಇಲ್ಲಿಯೇ ವಾಸಿಸುವವರು ಭಾಗವಹಿಸುತ್ತಿದ್ದಾರೆ, ಆದರೆ ಮುಂಬೈ ಸಹಿತ ಇತರ ಕಡೆಗಳಲ್ಲಿ ಸಮಸ್ಯೆ ಅಷ್ಟೊಂದಾಗಿ ಇಲ್ಲ. ಆದುದರಿಂದ ಅವರು ಆಸಕ್ತಿ ವಹಿಸುತ್ತಿಲ್ಲ. ನನಗೆ ಹೆಚ್ಚು ತಿಳಿದಿಲ್ಲ,'' ಎಂದು ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News