ಬೆಂಗಳೂರು: ಸ್ವೀಡನ್ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಮೇಯರ್ ಚರ್ಚೆ

Update: 2019-11-20 18:04 GMT

ಬೆಂಗಳೂರು, ನ.20: ನಗರಕ್ಕೆ ಶೈಕ್ಷಣಿಕ ಪ್ರವಾಸ ಬಂದಿದ್ದ ಸ್ವೀಡನ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ಮೇಯರ್ ಗೌತಮ್ ಕುಮಾರ್ ಭೇಟಿ ಮಾಡಿ ಚರ್ಚಿಸಿದರು.

ಈ ವೇಳೆ ನಗರದ ಶಿಕ್ಷಣ ವ್ಯವಸ್ಥೆ, ಜನಸಂಖ್ಯೆ, ಆಡಳಿತ, ನಗರದ ವಿಸ್ತೀರ್ಣ, ಸರಕಾರ ಹಾಗೂ ಪಾಲಿಕೆ ಹಿಂದುಳಿದ ವರ್ಗದ ಜನರಿಗೆ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ವಿಶೇಷ ಆಯುಕ್ತ (ಶಿಕ್ಷಣ ವಿಭಾಗ) ವೃಷಬೇಂದ್ರಸ್ವಾಮಿ, ಉಪ ಆಯುಕ್ತ (ಆಡಳಿತ) ಲಿಂಗಮೂರ್ತಿ, ಕಲ್ಯಾಣ ವಿಭಾಗ ಉಪ ಆಯುಕ್ತ ನಾಗೇಂದ್ರ ನಾಯ್ಕ್, ಶಿಕ್ಷಣ ವಿಭಾಗದ ಅಧಿಕಾರಿ ಹರೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News