ಚುನಾವಣಾ ಬಾಂಡ್ ಯೋಜನೆಗೆ ತಡೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಎಡಿಆರ್

Update: 2019-11-30 08:53 GMT

ಹೊಸದಿಲ್ಲಿ: ಚುನಾವಣಾ ಬಾಂಡ್ ಯೋಜನೆಗೆ ತಡೆ ಹೇರುವಂತೆ ಕೋರಿ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸುಪ್ರೀಂ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದೆ.

2017ರಲ್ಲಿ ಎಡಿಆರ್ ಸಲ್ಲಿಸಿರುವ ಅಪೀಲಿನ ಜತೆಗೆ ಇದು ಇಂಟರ್ವೆನ್ಶನ್ ಅಪ್ಲಿಕೇಶನ್ ಆಗಿದ್ದು, ಸೋಮವಾರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಅಪೀಲನ್ನು ಎಡಿಆರ್ ಪರವಾಗಿ ಸಲ್ಲಿಸಿದ್ದಾರೆ. ಹಣಕಾಸು ಕಾಯಿದೆಯ ರೂಪದಲ್ಲಿ ಅನುಮೋದನೆ ಪಡೆದ ವಿತ್ತೀಯ ಕಾಯಿದೆ 2017 ಹಾಗೂ ಈ ಹಿಂದಿನ ವಿತ್ತೀಯ ಕಾಯಿದೆ 2016ಗೆ ತರಲಾದ ಕೆಲವೊಂದು ತಿದ್ದುಪಡಿಗಳನ್ನು ರದ್ದುಪಡಿಸುವಂತೆ ಅಪೀಲಿನಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News