ಕೆ.ಆರ್.ಪುರದಲ್ಲಿ ಬಿಜೆಪಿಯ ಭೈರತಿ ಬಸವರಾಜ್, ಮಹಾಲಕ್ಷ್ಮೀ ಲೇಔಟ್ ನಲ್ಲಿ ಕೆ. ಗೋಪಾಲಯ್ಯ ಜಯಭೇರಿ

Update: 2019-12-09 08:51 GMT

ಬೆಂಗಳೂರು: ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಭೈರತಿ ಬಸವರಾಜ್ ಭರ್ಜರಿ ಜಯ ಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ನಾರಾಯಣ ಸ್ವಾಮಿ ಸೋಲನುಭವಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ನಲ್ಲಿ ಬಿಜೆಪಿಯ ಕೆ. ಗೋಪಾಲಯ್ಯ ಭಾರೀ ಮತಗಳ ಅಂತರದಲ್ಲಿ ಕಾಂಗ್ರೆಸ್ ನ ಶಿವರಾಜು ಅವರನ್ನು ಮಣಿಸಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಗೋಪಾಲಯ್ಯ 54 ಸಾವಿರ ಮತಗಳಷ್ಟು ಮುಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News