ಅಸ್ಸಾಂನಲ್ಲಿ ಇಂಟರ್ನೆಟ್ ಕಡಿತಗೊಳಿಸಲಾಗಿದೆ ಎಂದು ಮೋದಿಗೆ ನೆನಪಿಸಿದ ಕಾಂಗ್ರೆಸ್

Update: 2019-12-19 05:46 GMT

ಹೊಸದಿಲ್ಲಿ: "ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಚಿಂತಿಸುವ ಅಗತ್ಯವಿಲ್ಲ, ನಿಮ್ಮ ಹಕ್ಕುಗಳು, ಅಸ್ಮಿತೆ ಹಾಗೂ ಸಂಸ್ಕೃತಿಯನ್ನು ಯಾರೂ ಸೆಳೆಯಲು ಸಾಧ್ಯವಿಲ್ಲ ಎಂದು ಅಸ್ಸಾಂನ ನನ್ನ ಸೋದರ ಸೋದರಿಯರಿಗೆ ಭರವಸೆ ನೀಡುತ್ತೇನೆ'' ಎಂದು ಅಸ್ಸಾಂನಲ್ಲಿ ಮಸೂದೆ ವಿರುದ್ಧ ನಡೆಯುತ್ತಿರುವ ಭಾರೀ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, "ಅಸ್ಸಾಂನ ಜನರಿಗೆ ನಿಮ್ಮ ಸಂದೇಶ ಓದಲು ಸಾಧ್ಯವಿಲ್ಲ, ಅಲ್ಲಿ ಇಂಟರ್ನೆಟ್ ಸಂಪರ್ಕ ಕಡಿದು ಹಾಕಲಾಗಿದೆ" ಎಂಬುದನ್ನು ಪ್ರಧಾನಿಗೆ ನೆನಪಿಸಿದೆ.

"ಅಸ್ಸಾಂನ ನಮ್ಮ ಸೋದರ ಸೋದರಿಯರು ನಿಮ್ಮ `ಆಶ್ವಾಸನೆ'ಯ ಸಂದೇಶವನ್ನು ಓದಲು ಸಾಧ್ಯವಿಲ್ಲ ಮೋದೀಜಿ, ಅಲ್ಲಿ ಇಂಟರ್ನೆಟ್ ಕಡಿತಗೊಳಿಸಲಾಗಿದೆ'' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಧಾನಿಯನ್ನು ಕುಟುಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News