ಅಕ್ರಮ ಉಡ ಮಾರಾಟ ಯತ್ನ ಆರೋಪ: ಐವರು ಬಂಧನ

Update: 2019-12-12 12:37 GMT

ಬೆಂಗಳೂರು, ಡಿ.12: ಅಕ್ರಮವಾಗಿ ಉಡ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಶೋಕನ್, ಮಲ್ಲರಾಜ, ಗೋಪಿ, ಕರ್ಣ, ಐ.ರೆಡ್ಡಿ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನದ ಮರಳುಗಾಡಿನಿಂದ ಉಡಗಳನ್ನು ಹಿಡಿದು, ಅಕ್ರಮ ಸಾಗಾಣಿಕೆ ಮಾಡಿ ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೋರಮಂಗಲ ಠಾಣಾ ಪೊಲೀಸರು, ಅರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ 10 ಉಡಗಳನ್ನು ರಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News